ಯಕ್ಷಗಾನ ಕಲಾವಿದರ ಮಾಹಿತಿ ಕೋಶ: ಅಂಬಾತನಯ ಮುದ್ರಾಡಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 28 , 2013
|
ಒಕ್ಟೋಬರ್ 28 , 2013
|
ಯಕ್ಷಗಾನ ಕಲಾವಿದರ ಮಾಹಿತಿ ಕೋಶ: ಅಂಬಾತನಯ ಮುದ್ರಾಡಿ
ಮಲ್ಪೆ :
ನಾವು ನಿನ್ನೆಗಳನ್ನು ಮರೆಯುವಲ್ಲಿ ನಿಸ್ಸೀಮರು, ಅದರಲ್ಲೂ ಮರೆಯ ಬಾರದವರನ್ನು ಮರೆಯುವುದರಲ್ಲಿ ಮೊದಲಿಗರು. ಕಲಾ ಲೋಕದಲ್ಲಿ ಕಾಣಿಸಿಕೊಂಡು ಕಣ್ಮರೆಯಾದ ಕಲಾ ವಿಭೂತಿಗಳನ್ನು ನೆನಪಿಸುವ ಕೆಲಸ ಯು. ದುಗ್ಗಪ್ಪ ಅವರ ಉಡುಪಿ ಯಕ್ಷ ಪರಂಪರೆ ಮಾಡಿದೆ ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.
ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಯಕ್ಷಜ್ಯೋತಿ ಮಲ್ಪೆ, ಉಡುಪಿ ಯಕ್ಷಗಾನ ಕೇಂದ್ರ ಹಾಗೂ ಎಂ.ಜಿ.ಎಂ ಕಾಲೇಜಿನ ಆಶ್ರಯದಲ್ಲಿ ಯು.ದುಗ್ಗಪ್ಪ ಅವರ ಉಡುಪಿ ಜಿಲ್ಲಾ ಯಕ್ಷಗಾನ ಮಾಹಿತಿಗಳನ್ನೊಳಗೊಂಡ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಯಕ್ಷಗಾನದ ಸಮಗ್ರ ಮಾಹಿತಿ ನೀಡುವ ಈ ಹೊತ್ತಗೆ ಪ್ರತಿಯೊಬ್ಬ ಕಲಾವಿದ ಹೊಂದಿರಬೇಕು. ಇದು ಯಕ್ಷಗಾನದ ಮಾಹಿತಿ ಕೋಶವಾಗಿದೆ ಎಂದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತ ಅಧಿಕಾರಿ ಎಚ್. ಶಾಂತರಾಮ್, ಎಂ.ಜಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಡಾ.ಹಾಲಾ ನಾಯ್ಕ, ಹಿರಿಯ ಯಕ್ಷಗಾನ ವೇಷಧಾರಿ ಹೆಮ್ಮಾಡಿ ರಾಮ, ಡಾ. ಕೋಳ್ಯೂರು ರಾಮಚಂದ್ರ ರಾವ್, ತೋನ್ಸೆ ಜಯಂತ್ ಕುಮಾರ್, ಅಣ್ಣಯ್ಯ ಪಾಲನ್, ಮನೋಹರ್ ಕುಂದರ್, ಸತೀಶ್ ಕೆದ್ಲಾಯ, ದೇವದಾಸ್ ರಾವ್, ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಜ್ಯೋತಿ ಮಲ್ಪೆ ಪ್ರಕಾಶನದ ಉಡುಪಿ ಯಕ್ಷ ಪರಂಪರೆ ಸಂಪಾದಕ ಯು.ದುಗ್ಗಪ್ಪ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ವಂದಿಸಿದರು. ಬಳಿಕ ಕರ್ಣ-ಕುಂತಿ ಯಕ್ಷಗಾನ ತಾಳಮದ್ದಳೆ ಜರುಗಿತು.
ಕೃಪೆ : http://www.vijaykarnataka.com/
|
|
|