ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಕಲಾವಿದರ ಮಾಹಿತಿ ಕೋಶ: ಅಂಬಾತನಯ ಮುದ್ರಾಡಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 28 , 2013
ಒಕ್ಟೋಬರ್ 28 , 2013

ಯಕ್ಷಗಾನ ಕಲಾವಿದರ ಮಾಹಿತಿ ಕೋಶ: ಅಂಬಾತನಯ ಮುದ್ರಾಡಿ

ಮಲ್ಪೆ : ನಾವು ನಿನ್ನೆಗಳನ್ನು ಮರೆಯುವಲ್ಲಿ ನಿಸ್ಸೀಮರು, ಅದರಲ್ಲೂ ಮರೆಯ ಬಾರದವರನ್ನು ಮರೆಯುವುದರಲ್ಲಿ ಮೊದಲಿಗರು. ಕಲಾ ಲೋಕದಲ್ಲಿ ಕಾಣಿಸಿಕೊಂಡು ಕಣ್ಮರೆಯಾದ ಕಲಾ ವಿಭೂತಿಗಳನ್ನು ನೆನಪಿಸುವ ಕೆಲಸ ಯು. ದುಗ್ಗಪ್ಪ ಅವರ ಉಡುಪಿ ಯಕ್ಷ ಪರಂಪರೆ ಮಾಡಿದೆ ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.

ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಯಕ್ಷಜ್ಯೋತಿ ಮಲ್ಪೆ, ಉಡುಪಿ ಯಕ್ಷಗಾನ ಕೇಂದ್ರ ಹಾಗೂ ಎಂ.ಜಿ.ಎಂ ಕಾಲೇಜಿನ ಆಶ್ರಯದಲ್ಲಿ ಯು.ದುಗ್ಗಪ್ಪ ಅವರ ಉಡುಪಿ ಜಿಲ್ಲಾ ಯಕ್ಷಗಾನ ಮಾಹಿತಿಗಳನ್ನೊಳಗೊಂಡ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಯಕ್ಷಗಾನದ ಸಮಗ್ರ ಮಾಹಿತಿ ನೀಡುವ ಈ ಹೊತ್ತಗೆ ಪ್ರತಿಯೊಬ್ಬ ಕಲಾವಿದ ಹೊಂದಿರಬೇಕು. ಇದು ಯಕ್ಷಗಾನದ ಮಾಹಿತಿ ಕೋಶವಾಗಿದೆ ಎಂದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತ ಅಧಿಕಾರಿ ಎಚ್. ಶಾಂತರಾಮ್, ಎಂ.ಜಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಡಾ.ಹಾಲಾ ನಾಯ್ಕ, ಹಿರಿಯ ಯಕ್ಷಗಾನ ವೇಷಧಾರಿ ಹೆಮ್ಮಾಡಿ ರಾಮ, ಡಾ. ಕೋಳ್ಯೂರು ರಾಮಚಂದ್ರ ರಾವ್, ತೋನ್ಸೆ ಜಯಂತ್ ಕುಮಾರ್, ಅಣ್ಣಯ್ಯ ಪಾಲನ್, ಮನೋಹರ್ ಕುಂದರ್, ಸತೀಶ್ ಕೆದ್ಲಾಯ, ದೇವದಾಸ್ ರಾವ್, ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಜ್ಯೋತಿ ಮಲ್ಪೆ ಪ್ರಕಾಶನದ ಉಡುಪಿ ಯಕ್ಷ ಪರಂಪರೆ ಸಂಪಾದಕ ಯು.ದುಗ್ಗಪ್ಪ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ವಂದಿಸಿದರು. ಬಳಿಕ ಕರ್ಣ-ಕುಂತಿ ಯಕ್ಷಗಾನ ತಾಳಮದ್ದಳೆ ಜರುಗಿತು.

ಕೃಪೆ : http://www.vijaykarnataka.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ